ನನ್ನ ಮೊದಲ ಮಾತು...

ನಾನು ಮಾಡಾವು ಗಣೇಶ.
ನನ್ನ ಮನದ ಮಾತುಗಳನ್ನು ಇಲ್ಲಿ ಬ್ಲಾಗಿಸುತ್ತಿದ್ದೇನೆ...
ನಿಮ್ಮ ಓದುವಿಕೆ ಹಾಗೂ ಸಹಕಾರವನ್ನು ನಿರೀಕ್ಷೆ ಮಾಡುತ್ತೇನೆ.

ಭಾವನೆಗಳು ಉಕ್ಕಿ, ನೆನಪುಗಳ ಬುತ್ತಿ ಬಿಚ್ಚಿ, ಕಲ್ಪನೆಯ ಕಂಪು ಪಸರಿಸಿದಾಗ... «»«»«»«»«»«»«»«»«» ಮನಸಿನಾಳದ ಮಾತು ಹೊರಹೊಮ್ಮಿಸಲು ಇದೊಂದು ಪೀಠಿಕೆ!... ಒಳ್ಳೆಯ ಲೇಖನಗಳ ಬರೆಯಲು ಬೇಕು ನಿಮ್ಮಯ ಹಾರೈಕೆ. «»«»«»«»«»«»«»«»«»«»«»«»«»«»«» ಸದಾ ನಿಮ್ಮವ,
~
ಗಣೇಶ್ ಭಟ್,ಮಾಡಾವು

Friday, July 24, 2009

ಮಾನಸ ಸರೋವರ ಯಾತ್ರೆ-3

ತಾ-೨೬-೦೬-೦೯ ರಂದು ಬೆಳಿಗ್ಗೆ ೫ ಘಂಟೆಗೆ ಎದ್ದು ನಿತ್ಯ ವಿಧಿಗಳನ್ನು ಮುಗಿಸಿ ಉಪಾಹಾರವನ್ನೂ ಮಾಡಿಕೊಂಡು ನೇಪಾಲದ ಪ್ರಸಿದ್ದ ದೇವಸ್ಥಾನವಾದ ಪಶುಪತಿನಾಥ ದೇವಳಕ್ಕೆ ನಾವು ಹೋದೆವು.ಅಲ್ಲಿ ಶತರುದ್ರ ಹೇಳುವ ಭಾಗ್ಯ ನನಗೆ ದೊರೆಯಿತು. ಅಲ್ಲಿ ಹೋದೊಡನೆ ನಮ್ಮ ಊರಿನವರೇ ಆದ ಉಪ್ಪಳದ ಶ್ರೀಕಾಂತ ಕಾರಂತರು(ಅಲ್ಲಿನ ಅರ್ಚಕರಲ್ಲಿ ಒಬ್ಬರು) ಪರಿಚಯವಾದರು. ಇಲ್ಲಿ ನನಗೆ ಬೇಸರವಾದದ್ದು ಏನೆಂದರೆ ಇಲ್ಲಿನ ಶಿಲ್ಪಾ ಕಲೆಗಳ ಫೋಟೋ ತೆಗೆಯಲು ಕಡ್ಡಾಯವಾಗಿ ನಿರ್ಬಂಧ ಹೇಳಿದ್ದರು.ಪಶುಪತಿನಾಥ ದೇವಳವು ಪೂರ್ಣವಾಗಿ ಮರ (ಕಾಷ್ಠ) ದಿಂದ ನಿರ್ಮಾಣವಾಗಿದೆ.ನೇಪಾಳದಲ್ಲಿನ ಬೀರೆಂದ್ರಪಾಲ್ ರಾಜಮನೆತನದವರು ಈ ದೇವಳವನ್ನು ನವೀಕರಣ ಮಾಡಿದ್ದಾರೆ. ಕಾಷ್ಟದಿಂದ ನಿರ್ಮಾಣವಾದ ದೇವಳ ಮುಂದೆ ಕಾಷ್ಠ ಮಂಟಪ ,ಕಾಥ್ಮನ್ದು ಆಯಿತು ಎಂದು ಅರ್ಚಕರು ಹೇಳಿದರು.ಪಶುಪತಿನಾಥ ದೇವಸ್ಥಾನ ಇರುವುದು ಬಹಳ ಅಪರೂಪ.ಈ ದೇವಳದ ಮುಂದೆ ಬ್ರಿಹತ್ ಆಕಾರದ ಗೋವಿನ ವಿಗ್ರಹ ಇದೆ. ಅಲ್ಲಿಯೂ ಗೋವುಗಳು ಸ್ವಚಂದವಾಗಿ ವಿಹರಿಸುವಾಗ ಕಣ್ಣಮುಂದೆ ನಮ್ಮ ರಾಮಚಂದ್ರಾಪುರ ಮಠದಲ್ಲಿ ಗುರುಗಳ ಕಾಮದುಘಾ ಯೋಜನೆ ನೆನಪಾಯಿತು.ಪಶುಪತಿನಾಥನ ವಿಗ್ರಹದಲ್ಲಿ ಪಂಚ ಮುಖಗಳು ಇವೆ. ಗರ್ಭ ಗುಡಿಗೆ ಚತುರ್ದ್ವಾರ ಇದೆ. ಆಳೆತ್ತರ ಶಿವನ ಲಿಂಗರೂಪ ಹತ್ತಿರದಿಂದ ನೋಡಿದೆ.ಪಾರ್ವತಿ ಪೂಜೆಯನ್ನು ಲಿಂಗದ ಮೇಲ್ಭಾಗದಲ್ಲಿ ಶ್ರೀ ಚಕ್ರ ಮಂಡಲವನ್ನು ಚಂದನದಲ್ಲಿ ಬರೆದು ಪೂಜೆ ಮಾಡುತ್ತಾರಂತೆ. ನಾನು ೧೦೧ ರೂ ರಶೀದಿ ತೆತ್ತು ರುದ್ರಾಭಿಷೇಕ ಸಂಕಲ್ಪ ಮಾಡಿಸಿ ರುದ್ರ ಪಾರಾಯಣ ಮಾಡಿದೆವು. ಅಭಿಷೇಕ ಮುಗಿದ ನಂತರ ಅರ್ಚಕರು ತೀರ್ಥ ಪ್ರೋಕ್ಷಣೆ ಮಾಡಿ ಪಶುಪಥಿನಾಥನಿಗೆ ಅಲಂಕರಿಸಿದ ರುದ್ರಾಕ್ಷಿಯನ್ನು ನನ್ನ ಕೊರಳಿಗೆ ಹಾಕಿದರು. ಆಗ ಒಂದು ಕ್ಷಣ ನನಿಗೆ ಭಾವೊದ್ವೇಗವಾಗಿ ಮಾತೇ ಹೊರಡಲಿಲ್ಲ. ಕೊನೆಗೆ ನಾನ ಬಾಯಿಂದ ಬಂದ ಶ್ಲೋಕ "ಯಾನಿ ಕಾನಿಚ ಪಾಪಾನಿ "ಎಂಬ ಶ್ಲೋಕ. ಜನ್ಮ ಜನ್ಮಾಂತರದಲ್ಲಿ ಇರುವ ಪಾಪಗಳು ಶಿವನ ಕಂಠದಲ್ಲಿ ಇರುವ ವಿಷದಂತೆ ರುದ್ರಾಭಿಷೇಕದ ಮೂಲಕ ಶಿವನು ಸ್ವೀಕಾರ ಮಾಡಲಿ ಎಂದು ಪ್ರಾರ್ಥಿಸಿದೆ. ಪ್ರಸಾದ ಸ್ವೀಕರಿಸಿದೆ,ತುಂಬಾ ಕೃತಾರ್ಥ ಭಾವನೆ ತುಂಬಿ ಬಂತು.
ಇಲ್ಲಿಂದ ಸುಮಾರು ೧೦ ಕಿ.ಮೀ.ದೂರದಲ್ಲಿರುವ ಗುಹ್ಯೇಶ್ವರೀ ಎಂಬ ದೇವಳಕ್ಕೆ ನಮ್ಮನ್ನು ಕರೆದುಕೊಂಡು ಹೋದರು. ಇದು ಶಕ್ತಿ ಪೀಠ.ನಮ್ಮ ಹತ್ತಿರದ ಕೊಲ್ಲೂರಿನಂತೆ. ಶ್ರೀಚಕ್ರದ ಮೇಲ್ಭಾಗದಲ್ಲಿ ಇರುವ ಬಿಂದುವಿಗೆ ಗುಹ್ಯೇಶ್ವರೀ ಎಂದು ಕರೆಯುತ್ತಾರೆ.ಇಲ್ಲಿ ಕಲ್ಲಿನಿಂದ ನಿರ್ಮಿಸಿದ ಶ್ರೀ ಚಕ್ರವನ್ನು ಪೂಜೆ ಮಾಡುತ್ತಾರೆ. ತುಂಬಾ ಸಾನಿಧ್ಯದ ತಾಣ ಎಂದನಿಸಿತು.ಅಲ್ಲಿನ ಪುರೋಹಿತರ ಮೂಲಕ ಅರ್ಚನೆ ಮಾಡಿಸಿದೆ. ಇಲ್ಲಿ ನೇಪಾಳಿಗರು ಸರತಿ ಸಾಲಿನಲ್ಲಿ ಬಂದು ವಿವಾಹ ಮಾಡಿಕೊಳ್ಳುತ್ತಿದ್ದರು.ಅಷ್ಟೂ ವಿವಾಹಕ್ಕೆ ಪ್ರಸಿದ್ಧ ಸ್ಥಳ ಎಂದು ಇವರ ನಂಬಿಕೆ. ಅಲ್ಲಿ ಅವರ ವಿವಾಹ ವಿಧಿಗಳನ್ನು ಕೂತು ಗಮನಿಸಿದೆ. ಅಷ್ಟರಲ್ಲಿ ಹೊಟ್ಟೆ ಹಸಿಯುವುದೇಕೆ ಎಂದು ಸಮಯ ನೋಡಿದಾಗ ಘಂಟೆ ಮಧ್ಯಾನ್ಹ ೨ ಘಂಟೆ ಆದದ್ದೇ ತಿಳಿಯಲಿಲ್ಲ ...
ಕೂಡಲೇ ನಮ್ಮನ್ನು ನಾವುಳಿದ ಹೋಟೆಲಿಗೆ ಕರೆದುಕೊಂಡು ಹೋಗಿ ರುಚಿಯಾದ ಊಟ ಬಡಿಸಿದರು.ನಂತರ ವಿಶ್ರಾಂತಿ ತೆಗೆದುಕೊಂಡು ೭.೩೦ಕ್ಕೆ ನಾವು ಮುಂದೆ ಹೋಗುವ ಪ್ರಯಾಣದ ಬಗ್ಗೆ ಮಾಹಿತಿಯನ್ನು ಸಾಮ್ರಾಟ್ ಟ್ರಾವೆಲ್ಸ್ ನವರು ನೀಡಿದರು.ಪ್ರಯಾಣಕ್ಕೆ ಬೇಕಾದ ತಯಾರಿಯನ್ನು ಮಾಡಿ ಬ್ಯಾಗಿಗೆ ತುಂಬಿ ಪ್ರತಿಯೊಬ್ಬರಿಗೂ ಒಬ್ಬೊಬ್ಬ ಶೇರ್ಪಾ (ಸಹಾಯಕ)ನನ್ನು ಗೊತ್ತು ಮಾಡಿ ಊಟ ಮಾಡಿ ೧೦.೩೦ಕ್ಕೆ ಮಲಗಿದೆವು.

3 comments:

  1. nijavagiyu neenu bhagyashaliye sari.bhrata mateya suputra.alliya pooje punaskara muntada karyakramangalalle gamanavidda karana hottu hodde gontaidille,astondu tallinate iddare ellavu maravadu khandita

    ReplyDelete
  2. gud...olleya avakasha..bhavantaru ningo.. olleya anubhava samvedanattmaka baraha. barahada shailiya mattashtu improve madi..andhange kaluda salada Udayavani Ugadi Visheshanka sikkire kandita odi..Adaralli pashpatinata devastanada entire history, samakalina sthiti bagge vaidehi avara deergha lekhana iddu..Nice..ningala anubhavakke match akku..blog baravadara nillusedi...

    ReplyDelete
  3. ನಿಂಗೋ ಬರದ "ಅಭಿಷೇಕ ಮುಗಿದ ನಂತರ ಅರ್ಚಕರು ತೀರ್ಥ ಪ್ರೋಕ್ಷಣೆ ಮಾಡಿ ಪಶುಪಥಿನಾಥನಿಗೆ ಅಲಂಕರಿಸಿದ ರುದ್ರಾಕ್ಷಿಯನ್ನು ನನ್ನ ಕೊರಳಿಗೆ ಹಾಕಿದರು. " ಓದಿ ಮೈ ರೋಮಾಂಚನ ಆತು..

    ಗೋಕರ್ಣಲ್ಲಿ ಆವುತ್ತ ಶತ ರುದ್ರಕ್ಕೆ ಹೋಗಿತ್ತಿದ್ದಿರ?

    ನಿಂಗಳ,
    ಮಂಗ್ಳೂರ್ ಮಾಣಿ.

    ReplyDelete