ನನ್ನ ಮೊದಲ ಮಾತು...

ನಾನು ಮಾಡಾವು ಗಣೇಶ.
ನನ್ನ ಮನದ ಮಾತುಗಳನ್ನು ಇಲ್ಲಿ ಬ್ಲಾಗಿಸುತ್ತಿದ್ದೇನೆ...
ನಿಮ್ಮ ಓದುವಿಕೆ ಹಾಗೂ ಸಹಕಾರವನ್ನು ನಿರೀಕ್ಷೆ ಮಾಡುತ್ತೇನೆ.

ಭಾವನೆಗಳು ಉಕ್ಕಿ, ನೆನಪುಗಳ ಬುತ್ತಿ ಬಿಚ್ಚಿ, ಕಲ್ಪನೆಯ ಕಂಪು ಪಸರಿಸಿದಾಗ... «»«»«»«»«»«»«»«»«» ಮನಸಿನಾಳದ ಮಾತು ಹೊರಹೊಮ್ಮಿಸಲು ಇದೊಂದು ಪೀಠಿಕೆ!... ಒಳ್ಳೆಯ ಲೇಖನಗಳ ಬರೆಯಲು ಬೇಕು ನಿಮ್ಮಯ ಹಾರೈಕೆ. «»«»«»«»«»«»«»«»«»«»«»«»«»«»«» ಸದಾ ನಿಮ್ಮವ,
~
ಗಣೇಶ್ ಭಟ್,ಮಾಡಾವು

Friday, August 28, 2009

ಮಾನಸ ಸರೋವರ ಯಾತ್ರೆ -೭

ಸಗಾ... ಇದು ನಮ್ಮ ಚಾರಣದ ೨ನೆ ಪಟ್ಟಣ ....ನೈಲಂನಿಂದ ಸುಮಾರು ೨೦೦ ಕಿಮೀ ದೂರ ...ಇದು ನಾವು ಕಾಣುವ ಕೊನೆಯ ವಸತಿಗೃಹ ....ನೈಲಂನಿಂದ ಬೆಳಿಗ್ಗೆ ೫ ಘಂಟೆಗೆ ಹೊರಟೆವು ...ಪ್ರಯಾಣ ಮಾಡುವಾಗ ದಾರಿ ಮಧ್ಯದಲ್ಲಿ ಪ್ರಕೃತಿಮಾತೆಯ ಫೋಟೋ ತೆಗೆಯುವಾಗ ನಮ್ಮ ಕೈಯಲ್ಲಿ ಕ್ಯಾಮರ ನಡುಗುತ್ತಿತ್ತು..ಚಳಿಯ ತೀವ್ರತೆ ಅಷ್ಟಿತ್ತು.ಆದರೂ ಆ ಚಳಿಯೂ ಒಂದು ರೀತಿಯ ಮಜಾ ಕೊಡುತ್ತಿತ್ತು..೭ ಘಂಟೆಯ ಹೊತ್ತಿಗೆ ನಮ್ಮ ಕಾರು ಒಂದು ವಿಶಾಲವಾದ ಬಯಲಿನಲ್ಲಿ ನಿಂತಿತು.ಬ್ರೆಡ್ ಜ್ಯಾಮ್ ತಿಂದು ಮುಂದೆ ಹೊರಟೆವು.. ನಮ್ಮ ಕಾರಿಗೆ ಹೋಗಲು ನಿಶ್ಚಿತವಾದ ದಾರಿ ಇರಲಿಲ್ಲ.ನಾವು ಹೋಗ ಬೇಕಾದ ಸ್ಥಳವನ್ನು ನಮ್ಮ ಡ್ರೈವರ್ ದಿಕ್ಸೂಚಿ ಮತ್ತು ಮ್ಯಾಪ್ ಸಹಾಯದಿಂದಿಂದ ತಿಳಿದುಕೊಂಡು ಚಾಲನೆ ಮಾಡುತ್ತಿದ್ದ.. ಮಧ್ಯಾಹ್ನ ೨.೩೦ಕ್ಕೆ ಸರಿಯಾಗಿ ಸಗಾ ನಗರವನ್ನು ತಲುಪಿದೆವು ಹೊಟ್ಟೆ ಹಸಿವು..ತಂಡದ ಅಡುಗೆ ನಂತರ ತಯಾರಾಗಬೇಕಷ್ಟೇ.ಎಲ್ಲಿ ನೋಡಿದರೂ ಮಾಂಸದ ಹೋಟೆಲ್.ನಮ್ಮ .ನನಗೆ ಒಂದು ಕಿಮೀ ನಡೆದಾಗ ಒಂದು ಹಣ್ಣಿನ ಅಂಗಡಿ ಕಂಡಿತು....ಅಂಗಡಿಯ ಒಳ ಹೊಕ್ಕೆ....ಒಂದು ಕೆಜಿ ಆಪಲ್ ತೆಗೆದು ಕೊಂಡೆ.. ಬೆಲೆ ಎಷ್ಟು ಎಂದು ಕೇಳಿ...ನಮ್ಮ ೬೦೦ ರೂಪಾಯಿ.. ಅಂದರೆ ಅಲ್ಲಿಯ ಸುಮಾರು ೮೦ ಯುವಾನ್.ಆದರೆ ಏನ್ಮಾಡೋದು.ಹಸಿವು ಬೇರೆ ...ವಿಧಿ ಇಲ್ಲದೆ ತೆಗೆದುಕೊಂಡೆ..ಬರುವಾಗಲೇ ತಿಂದುಕೊಂಡು ಬಂದೆ..ನಮ್ಮ ವಸತಿ ಗೃಹ ತಲುಪುವಾಗ ಖಾಲಿ ಪ್ಲಾಸ್ಟಿಕ್ ಚೀಲ ಮಾತ್ರ ಇತ್ತು.....ಬಂದು ರೂಮಿನಲ್ಲಿ ಬಂದು ಮಲಗಿದೆ.ಚಳಿ ಬೇರೆ ..AC ಚಾಲೂ ಆದರೂ ಚಳಿ ಕಮ್ಮಿ ಆಗಲೇ ಇಲ್ಲ..ಕುರ್ಚಿಯಲ್ಲ್ಲಿ ಕೂತು ಟಿವಿ ನೋಡ್ತಾ ಇದ್ದ ನನಗೆ ನಿದ್ದೆ ಬಂದದ್ದೆ ಗೊತ್ತಾಗಲಿಲ್ಲಾ.. ಅಷ್ಟು ಆಯಾಸ ಆಗಿತ್ತು..ಕಾರಿನ ಪ್ರಯಾಣ. .ಸಂಜೆ ೫ ಘಂಟೆಯ ಸಮಯ..ರೂಮಿನ ಬಾಗಿಲು ತಟ್ಟಿದರು..ನಮ್ಮ ಶೆರ್ಪಗಳು..ಊಟ ತಯಾರಾಗಿದೆ ಎಂದರು..ಸರಿ,ರೂಮಿಗೆ ಊಟ ಬಂತು. ಅನ್ನ ಇಲ್ಲ..ಎರಡು ರೊಟ್ಟಿ.ಪಲ್ಯ.ಟೊಮೇಟೊ ಸೂಪ್ ..ಅಲ್ಲಿಗೆ ಮುಗಿಯಿತು ಊಟ.ಅಷ್ಟೇ ಕೊಡ್ತಾರೆ.ಹಸಿವು ಆಗಿದೆ ಎಂದು ಹೊಟ್ಟೆ ತುಂಬಾ ತಿನ್ನಲು ನಮ್ಮ ಪಾಂಡೆ ಅವರ ಅನುಮತಿ ಇಲ್ಲ..ಇವತ್ತಿನಿಂದ ಇನ್ನು ಊಟದ ಸಮಯ ಹೀಗೆ..ದಿವಸಕ್ಕೆ ಒಂದು ಊಟ.ಬೆಳಿಗ್ಗೆ ಬ್ರೆಡ್ ಜ್ಯಾಮ್.ರಾತ್ರಿ ಊಟ ಇಲ್ಲ. ಸಂಜೆ ಘಂಟೆ ೬.ಆಯಿತು..ಇವತ್ತು ರಾತ್ರಿ ವಾಕಿಂಗ್.ನಾನು ಕೋಟು ,ಜಾಕಿಟ್,ತಲೆಗೆ ಟೊಪ್ಪಿ,ಒಂದು ಟಾರ್ಚ್ ಎಲ್ಲ ತಯಾರು ಮಾಡಿಕೊಂಡು ಸುಮಾರು 3 ಕಿಮೀ ವಿಶಾಲವಾದ ಬಯಲಿನಲ್ಲಿ ಪಾಂಡೆಯವರ ಜೊತೆ ಹೊರಟೆ..ಯಾವ್ದು ಗುಡ್ಡ? ಯಾವ್ದು ದಾರಿ ಒಂದೂ ಗೊತ್ತಾಗಿಲ್ಲ.ಅಂತೂ ಒಂದು ಸಣ್ಣ ತೊರೆ ಬಳಿ ಕರೆದುಕೊಂಡು ಹೋದರು.ಪ್ರಾರಂಭಿಸಿದೆವು..ನಾವು ಒಟ್ಟು ೩೨ ಜನ ಇದ್ದ ಕಾರಣ ಏನೂ ಭಯ ಇರಲಿಲ್ಲ.ಇದರಲ್ಲಿ ನಾವು ನೇರವಾಗಿ ಮೇಲೆ ಹೋಗಬೇಕು.ಎಂದು ಹೇಳಿದರು..ಸರಿ ಹೊರಟಾಯಿತು..ನಾವು ನಮ್ಮ ಶರೀರದ ಎಲ್ಲ ಅಂಗಗಳನ್ನು ಮುಚ್ಚಿಕೊಂಡು ಹೋದ ಕಾರಣ ನಮಗೆ ಚಳಿಯ ತೀವ್ರತೆ ತಿಳಿಯಲಿಲ್ಲ.ಸಮಯ ರಾತ್ರಿ ೮.೩೦...ನಮ್ಮ ಚಾರಣ ಪ್ರಾರಂಭವಾಯಿತು. ಆ ತೊರೆಯಲ್ಲಿ ಇದ್ದ ಸುಮಾರು ೧ ಮೀಟರ್ ಎತ್ತರದ ಬಂಡೆಕಲ್ಲುಗಳನ್ನು ಒಂದೊಂದೇ ಏರಲು ಒಂದು ಕಡೆ ತುಂಬಾ ಎತ್ತರದಿಂದ ನೀರು ಬೀಳುತ್ತಿತ್ತು.ಕ್ಯಾಮರಾದಲ್ಲಿ ಇದನ್ನು ಸೆರೆ ಹಿಡಿಯೋಣ ಎಂದರೆ ನಮ್ಮ ಯಾವ ಕ್ಯಾಮರಾವೂ ಚಳಿಗೆ ಕೆಲಸ ಮಾಡುತ್ತಿರಲಿಲ್ಲ.ತುಂಬಾ ನಿರಾಸೆ ,ಬೇಸರವಾಯಿತು..ಸುಮಾರು ೨ ಕಿಮೀ ದೂರ ನಾವು ತೊರೆಯ ಮಧ್ಯದಲ್ಲಿಯೇ ಸಾಗಿದೆವು.ಒಂದು ಎತ್ತರದ ಪ್ರದೇಶ ಕಂಡಿತು..ಶುಕ್ಲಪಕ್ಷದ ಚಂದ್ರನ ಬೆಳಕಿನಲ್ಲಿ ಸುತ್ತ ಮುತ್ತಲಿನ ಪ್ರದೇಶಗಳು ,ಗುಡ್ಡಗಳು ,ಪರ್ವತಗಳು.ತುಂಬಾ ಸುಂದರವಾಗಿ ಕಂಡಿತು.ಹಿಮದಲ್ಲಿ ತೋಯ್ದ ಎಲ್ಲ ಪ್ರದೇಶಗಳು ಮಿನುಗು ಹುಳುಗಳ ಅಲಂಕಾರ,ಪ್ರಕೃತಿ ಮಾತೆಯು ನೈಸರ್ಗಿಕ ಆಭರಣ ತೊಟ್ಟು ನಮ್ಮ ಎದುರೇ ಬಂದಳೇ? ಎನ್ನಿಸುವಷ್ಟು ಭಾಸವಾಯಿತು..ಈ ಸನ್ನಿವೇಶ ಎಷ್ಟು ಹೇಗೆ ಯಾವ ರೀತಿಯಲ್ಲಿ ವರ್ಣಿಸಿದರೂ ಕಡಿಮೆಯೇ.......ಸುಮಾರು ಒಂದು ಘಂಟೆಯಷ್ಟು ಸಮಯ ಅಲ್ಲೇ ಕಳೆದು ನಾವು ಬಂದ ದಾರಿಯಲ್ಲೇ ಕೆಳಗೆ ಇಳಿಯುತ್ತಾ ಬಂದೆವು..ಕೆಲವು ಜನ ಅಲ್ಲಿಯೇ ಜಾರಿ ಬಿದ್ದರು..ಪ್ರತಿಯೊಬ್ಬರಿಗೂ ಒಬ್ಬೊಬ್ಬ ಶೇರ್ಪಾ (ಅಂಗರಕ್ಷಕ) ಇದ್ದ ಕಾರಣ ದೊಡ್ಡ ಸಮಸ್ಯೆ ಯಾರಿಗೂ ಆಗಲಿಲ್ಲ. ಆದರೆ ಉಸಿರಾಟದ ತೊಂದರೆ.....ಆಮ್ಲಜನಕದ ಕೊರತೆಯಿಂದಾಗಿ ನಮಗೆ ಏದುಸಿರು ಬಿಡಬೇಕಾದ ಪರಿಸ್ಥಿತಿ ಕೆಲವೊಮ್ಮೆ ಬರುತ್ತಿತ್ತು.ಆದರೂ ಏನೂ ತೊಂದರೆ ಆಗಲಿಲ್ಲ.. ನಾವು ಕೆಳಗೆ ಇಳಿದು ವಿಶಾಲವಾದ ಬಯಲಿನಲ್ಲಿ ನಡೆಯುತ್ತಾ ಬಂದು ನಮ್ಮ ರೂಮಿಗೆ ತಲುಪುವಾಗ ಮಧ್ಯರಾತ್ರಿ ೩ ಘಂಟೆ.ಬಂದು ಸ್ವಲ್ಪ ಟೀ ಕುಡಿದು ಮಲಗಿದೆವು.ಈ ಸಮಯದಲ್ಲಿ ನಮ್ಮ ಆಹಾರ ಸಮಯ ಎಲ್ಲಾ ಏರುಪೇರು.ನಮ್ಮ ಶರೀರದ ಕೊಬ್ಬು ಬೊಜ್ಜು ಎಲ್ಲಾ ಅರ್ಧಕ್ಕೇ ಅರ್ಧ ಇಳಿದು ಹೋಗಿತ್ತು. ಮಲಗಿದ ನಾವು ಪ್ರಕೃತಿ ಮಾತೆಯನ್ನು ನಮ್ಮಷ್ಟಕ್ಕೆ ಪರಸ್ಪರ ನಮಗಾದ ಅನುಭವವನ್ನು ಹಂಚಿಕೊಂಡೆವು..ಅನನ್ಯವಾದ ಪ್ರಕೃತಿ ಮಾತೆ ನಮ್ಮ ಕೈ ತಪ್ಪಿ ಹೋದ ಬಗ್ಗೆ ತುಂಬಾ ಬೇಸರವಾಯಿತು. ಆದರೂ ಆಕೆಯ ವೈಭವ ದರ್ಶನ ನಮಗೆ ಆದದ್ದು ನಮ್ಮ ಭಾಗ್ಯ ,ಅದನ್ನು ಕಾಪಾಡಿಕೊಂಡು ಬಂದ ನಮ್ಮ ಅರ್ವಾಚೀನ ಭಾರತ ಪರಂಪರೆಗೆ ನಮನ ಸಲ್ಲಿಸುತ್ತಾ ಹಾಗೆ ನಿದ್ರೆಗೆ ಜಾರಿದೆವು..

No comments:

Post a Comment