ನನ್ನ ಮೊದಲ ಮಾತು...

ನಾನು ಮಾಡಾವು ಗಣೇಶ.
ನನ್ನ ಮನದ ಮಾತುಗಳನ್ನು ಇಲ್ಲಿ ಬ್ಲಾಗಿಸುತ್ತಿದ್ದೇನೆ...
ನಿಮ್ಮ ಓದುವಿಕೆ ಹಾಗೂ ಸಹಕಾರವನ್ನು ನಿರೀಕ್ಷೆ ಮಾಡುತ್ತೇನೆ.

ಭಾವನೆಗಳು ಉಕ್ಕಿ, ನೆನಪುಗಳ ಬುತ್ತಿ ಬಿಚ್ಚಿ, ಕಲ್ಪನೆಯ ಕಂಪು ಪಸರಿಸಿದಾಗ... «»«»«»«»«»«»«»«»«» ಮನಸಿನಾಳದ ಮಾತು ಹೊರಹೊಮ್ಮಿಸಲು ಇದೊಂದು ಪೀಠಿಕೆ!... ಒಳ್ಳೆಯ ಲೇಖನಗಳ ಬರೆಯಲು ಬೇಕು ನಿಮ್ಮಯ ಹಾರೈಕೆ. «»«»«»«»«»«»«»«»«»«»«»«»«»«»«» ಸದಾ ನಿಮ್ಮವ,
~
ಗಣೇಶ್ ಭಟ್,ಮಾಡಾವು

Friday, August 7, 2009

ಮಾನಸ ಸರೋವರ ಯಾತ್ರೆ-5

ಆಹ್,, ಅಬ್ಬಾ,, ಚಳಿ,,,ಎಂದು ಬದಿ ತಿರುಗಿಸುವಾಗ " ಹಲೋ ಗಣೇಶ್ "ಎಂದು ಎರಡು ಸಲ ನನ್ನ ಹೆಸರು ಕರೆಯುವುದು ಕೇಳಿತು." I am dinesh pandey ......open the door.." ಎಂಬ ಧ್ವನಿ ..ನಾನು ಗಡಿಬಿಡಿಯಿಂದ ಎದ್ದು ನೋಡುವಾಗ ಘಂಟೆ ನಮ್ಮ ಭಾರತದ ಟೈಮ್ ಪ್ರಕಾರ ಬೆಳಗ್ಗೆ ೨.30 ಆಗಿತ್ತು."ಯಾಕೆ?"ಎಂದು ಪಾಂಡೆಯವರಲ್ಲಿ ಕೇಳಿದೆ. ಏನು ಇಲ್ಲ ಈಗ ಹೊರಡಿ ಬೇಗ..ನಾನು ಬೇಗ ನನ್ನ ಬ್ಯಾಗ್ ತುಂಬಿ ಪಾಂಡೆ ಜೊತೆ ಹೊರಟೆ."ತುತೋಯಿ " ಎಂದು ಒಬ್ಬ ಟೆಬೆಟ್ ವ್ಯಕ್ತಿಯನ್ನು ಕರೆದು ನನ್ನ ಬ್ಯಾಗನ್ನು ಆ ವ್ಯಕ್ತಿ ಕೈಯಲ್ಲಿ ಕೊಡಲು ಹೇಳಿದರು..ನಾನು ಒಂದು ಸಲ ಕಣ್ಣು ಉಜ್ಜಿ ಆ ವ್ಯಕ್ತಿಯನ್ನು ನೋಡಿದೆ..ಹಾಯ್,ಎಂದು ಹೇಳಿದ.ಹಾಯ್ ಅಂದೆ.ಏನೊಂದೂ ಗೊತ್ತಾಗದೆ ಅವನೊಂದಿಗೆ ಹೊರಟೆ.ನನ್ನನ್ನು ಕರೆದುಕೊಂಡು ಸುಮಾರು ೧ಕಿಮಿ ದೂರ ಹೋದಾಗ ಅಲ್ಲಿ ಒಂದು ಕಾರನ್ನು ತೋರಿಸಿ ಇಲ್ಲಿ ಕೂತುಕೊಳ್ಳಿ ಎಂದು ಕೈ ಸನ್ನೆ ಮಾಡಿದ,ನಾನು ಅವನು ಹೇಳಿದಂತೆ ಮಾಡಿದೆ..ಕಾರಿನಲ್ಲಿ ಒಟ್ಟು ನಾಲ್ಕು ಜನ ಪ್ರಯಾಣ ಮಾಡಬಹುದಾದಷ್ಟು ಸ್ಥಳಾವಕಾಶ ಇತ್ತು.ನಾನು,ಕೇಶವ ಪ್ರಸಾದ್,ನಂದ ಕಿಶೋರ್,ಮಹೇಶ್ ಇಷ್ಟು ಜನ ನಾವು ಕಾರಿನ ಬಳಿ ಸೇರಿದೆವು. ನಮ್ಮ ಡ್ರೈವರ್ " ತುತೋಯಿ " ಎಂದು ಗೊತ್ತಾಯಿತು.ಯಾಕೆ ಇಷ್ಟು ಬೇಗ? ಎಂದು ನಾವು ನಾಲ್ಕೂ ಜನ ಪ್ರಶ್ನೆ ಮಾಡಿಕೊಂಡೆವು ..... ಯಾರಿಗೂ ಗೊತ್ತಿಲ್ಲ.ಸುಮಾರು ೨೦ ಕಾರುಗಳು ಸಾಲಾಗಿ ನಿಂತಿದ್ದವು.ಮುಂಜಾನೆಯ ಮಂಜು ಚಳಿಯಲ್ಲಿ ನಡುಗುತ್ತಾ ಅಲ್ಲೇ ಹಲ್ಲುಜ್ಜಿದ ಶಾಸ್ತ್ರ ಮಾಡಿ ಕಾರಿನಲ್ಲಿ ಕುಳಿತೆವು.ಕಾರಿಗೆ ನಮ್ಮ ಊರಿನಲ್ಲಿ ಇರುವ ಜೀಪಿನ ಹಾಗೆಯೇ ಫೋರ್ವ್ಹೀಲ್ ಸೌಲಭ್ಯ ಇತ್ತು. " ತುತೋಯಿ "ನಮ್ಮ ಕಾರಿನ ಬಗ್ಗೆ ಮಾಹಿತಿ ತಿಳಿದು ಕೊಂಡೆವು.ನಮಗೆ ಬರುವ ಎಲ್ಲಾ ಭಾಷೆಯನ್ನೂ ಅವನಲ್ಲಿ ಪ್ರಯೋಗಿಸಲಾಯಿತು. ಏನೂ ಪ್ರಯೋಜನ ಆಗಲಿಲ್ಲ. ಅವನಿಗೆ ಟೆಬೆಟ್ ಭಾಷೆ ಮಾತ್ರ ಬರುತ್ತಿತ್ತು.ಕೊನೆಗೆ ಉಳಿದದ್ದು ನಮ್ಮ ಮೋಕ ಭಾಷೆ ಮಾತ್ರ.ಅವನು ಕಾರಿನ ಬಗ್ಗೆ ವಿವರಿಸಿದ.ಇದು ಪೆಟ್ರೋಲ್ ಕಾರ್.ಲೆಫ್ಟ್ ಹ್ಯಾಂಡ್ ಡ್ರೈವ್.ಇನ್ನೂ ಹೇಳಿದ.ನಮಗೆ ಅರ್ಥವಾಗದಿದ್ದರೂ ಅವನ ಸನ್ನೆಯ ಮೋಲಕ ಅರ್ಥ ಮಾಡಿಕೊಂಡೆವು.ನಮ್ಮನ್ನು ಎಲ್ಲರನ್ನೂ ಅಳಗಪ್ಪನ್ ಚೆಟ್ಟಿಯಾರ್ ಎಲ್ಲರೂ ಬಂದಿದ್ದೀರಾ?ಎಂದು ವಿಚಾರಿಸಿಕೊಂಡರು. ಕಾರು ಸ್ಟಾರ್ಟ್ ಆಯಿತು.ಸಮಯ ಬೆಳಿಗ್ಗೆ ೩.೪೫ ...
ಮುಂದೆ ೧ ಕಿಮೀ ಹೋದಾಗ ಎದುರಿನಿಂದ ಒಂದು ವಾಹನ ಬಂತು.ನಮ್ಮ ಕಾರಿಗೆ ಆಗ ಸುಮಾರು ನನಗೆ ಅನಿಸುವಷ್ಟು ಸನಿಹದಲ್ಲಿ ಸೈಡ್ ಕೊಟ್ಟಿತು. ಕಾರಣ ನಮ್ಮ ಕಾರು ಡ್ರೈವ್.ನಮ್ಮ ಆಗ ಡ್ರೈವರ್ ಹೇಳಿದ್ದು ನೆನಪಾಯಿತು.ನಿಮ್ಮ ಇಂಡಿಯಾದಲ್ಲಿ ಮಾತ್ರ ರೈಟ್ ಹ್ಯಾಂಡ್ ಡ್ರೈವ್, ಎಂದು ಹೇಳಿದ.ನಮ್ಮಲ್ಲಿ ಯಾಕೆ ಹೀಗೆ ಎಂದು ನಾವು ನಾವು ಪ್ರಶ್ನೆ ಮಾಡಿಕೊಂಡೆವು.. ನಮ್ಮಲ್ಲಿನ ಧಾರ್ಮಿಕತೆ ಆಗ ಅರ್ಥ ಆಯಿತು.ಎಲ್ಲ ಪ್ರದಕ್ಷಿಣೆ. ದೇವಾಲಯ,ನಮಸ್ಕಾರ,ಅಭಿವಾದನೆ ಇತ್ಯಾದಿ...
ಆಗ ನಮ್ಮ ಕಾರು ಸುಮಾರು ೧೨ ಕಿಲೋ ಮೀಟರ್ ಕ್ರಮಿಸಿತ್ತು.ಸುಮಾರು ೪.೪೫ ರ ಸಮಯ.ಬೆಳಕು ಸರಿಯಾಗಿ ಹರಿದಿರಲಿಲ್ಲ. ನಮ್ಮ ಹಿಂದೆ ಮುಂದೆ ಕಾರುಗಳು ನಿಂತಿದ್ದವು.ಯಾಕೆ ಅಂತ ಗೊತ್ತೇ ಆಗಿಲ್ಲ ,ನಮ್ಮ ಒಟ್ಟಿಗೆ ಇದ್ದವರ ಹತ್ತಿರ ಕೇಳೋಣವೆಂದರೆ ಅವರು ನಿದ್ರೆಯಲ್ಲಿದ್ದರು,ಡ್ರೈವರ್ ಹತ್ತಿರ ನನಗೆ ಭಾಷೆಯ ಸಮಸ್ಯೆ..ಆದರೂ ಕೈ ಸನ್ನೆ ಮಾಡಿದ.ನನಗೆ ಅರ್ಥವಾಗಲಿಲ್ಲ.ನಮ್ಮ ಮುಂದಿನ ಕಾರು ಮತ್ತು ನಮ್ಮ ಕಾರಿಗೆ ಸುಮಾರು ೨೦ ಮೀಟರ್ ಅಂತರ ಇತ್ತು ..ನಿಧಾನವಾಗಿ ಮುಂದೆ ಸಾಗಿತು.ಒಂದು ಕ್ಷಣ ತೊಟ್ಟಿಲಿನಲ್ಲಿ ತೂಗಿದ ಅನುಭವ ಆಯಿತು.ಮುಂದೆ ಹೋದಾಗ ಡ್ರೈವರ್ ಕಾರಿನಿಂದ ಕೆಳಗೆ ಇಳಿಯಲು ಹೇಳಿದನು.ನಾನು ಮತ್ತು ಡ್ರೈವರ್ ಇಬ್ಬರೇ ಇಳಿದು ಹಿಂದೆ ನಡೆದೆವು.ಒಂದು ಕ್ಷಣ ಡ್ರೈವರ್ ತೋರಿಸಿದ ಆ ದೃಶ್ಯ ನನಗೆ ಆ ಕೊರೆಯುವ ಚಳಿಯಲ್ಲೂ ಬೆವರು ಹರಿಯುವಂತೆ ಆಯಿತು..ಅಲ್ಲಿ ಸುಮಾರು ೩೦೦ ಫೀಟ್ ಆಳದಲ್ಲಿ ನೀರು ಧುಮುಕುತ್ತಿತ್ತು. ಮಂಜು ಕವಿದ ಕಾರಣ ಆಳ ಸರಿಯಾಗಿ ಕಾಣಿಸುತ್ತಿರಲಿಲ್ಲ.ಘಾಟ್ ಪ್ರದೇಶ .....ಬಲಬದಿಯಿಂದ ಗೋಡೆ.ಎಡ ಬದಿ ಆಳವಾದ ಪ್ರದೇಶ.ಮಾರ್ಗದ ಎರಡೂ ಬದಿ (ಮಾರ್ಗದ ಹಿಂದೆ ಮುಂದೆ.) ಸಿಮೆಂಟ್ ನ ಕಂಬಗಳು ಇದ್ದವು.ಮಾರ್ಗ ಮಧ್ಯದಲ್ಲಿ ಸುಮಾರು ೧೫ ಮೀಟರ್ ಅಗಲಕ್ಕೆ ಒಂದು ಆಳವಾದ ನದಿ ಹರಿಯುತ್ತಿತ್ತು.ಬಲಬದಿಯ ಗೋಡೆಯಿಂದ ಎಡಗಡೆ ಇರುವ ಕಂಬಗಳಿಗೆ ಕಬ್ಬಿಣದ ಬಲೆಯನ್ನು ವೃತ್ತಾಕಾರವಾಗಿ ಕಟ್ಟಲಾಗಿತ್ತು. ಅಡಿಭಾಗ ಏನೂ ಇರಲಿಲ್ಲ.ಅಲ್ಲಿ ದಾರಿಯ ಅಗಲ ಕೇವಲ ೫ ಮೀಟರ್ ಇರಬಹುದು ಅಷ್ಟೇ.ಈ ಕಬ್ಬಿಣದ ಬಲೆಯ ಒಳಗೆ ನಮ್ಮ ಕಾರು ಬಂದಿದೆ ಎಂದಾಗಲೇ ನನಗೆ ಬೆವರುವದು ಕೈ, ಕಾಲು ನಡುಗಲು ಪ್ರಾರಂಭ ಆಯಿತು.ಒಂದೊಂದೇ ಕಾರು ಇದರಲ್ಲಿ ದಾಟಲು ಅವಕಾಶ.ಈ ದೃಶ್ಯವನ್ನು ವರ್ಣಿಸಲು ಅಸಾಧ್ಯ.ಕಾರುಗಳು ಇದರಲ್ಲಿ ದಾಟುವಾಗ ಇದರ ಮೇಲ್ಭಾಗದಲ್ಲಿ ಕಟ್ಟಿದ ಕಬ್ಬಿಣದ ಬಲೆಯು "ಕಿರ್ಕ್ ಕಿರ್ಕ್"ಶಬ್ದ ಮಾಡುವಾಗ ಈಗ ಮುರಿದು ಬೀಳುತ್ತದೆ ಎಂಬಷ್ಟು ಹೆದರಿಕೆ ಆಯಿತು.ಆಗಲೇ ನಮ್ಮ ಡ್ರೈವರ್ ಗೆ "ಶಹಭಾಸ್" ಎಂದು ಹೇಳಿ ಅವನ ಬೆನ್ನು ತಟ್ಟಿದೆ.ಈ ಘಟನೆ ನಡೆದಾಗಲೂ ನಮ್ಮ ಕಾರಿನಲ್ಲಿ ಇದ್ದವರಿಗೆ ಗೊತ್ತೇ ಆಗಲಿಲ್ಲ.ಅಂತೂ ಅಲ್ಲಿಂದ ನಾವು ಹೊರಟೆವು.ಈಗ ಅರ್ಥ ಆಯಿತು.ಈಗ ನಮ್ಮನ್ನು ೨.೩೦ಕ್ಕೆ ಎಬ್ಬಿಸಿ ಕರೆದುಕೊಂಡು ಬಂದುದರ ಅರಿವಾಯಿತು....ಅಷ್ಟು ಭಯಾನಕವಾದ ಪ್ರದೇಶ ಮತ್ತು ಕಡಿದಾದ ರಸ್ತೆ ಕಂಡಾಗ ಎಂಥವರೂ ಹೆದರುವುದು ಖಂಡಿತ..ಹೀಗೆ ಮೇಲ್ಭಾಗ ಹೋಗುತ್ತಿರುವಾಗ ಒಂದು ಕಡೆ ನಾವು ಹೋಗುವ ದಾರಿಗೆ ಮಂಜುಗಡ್ಡೆ ಬಿದ್ದು ಇತ್ತು.ಅದನ್ನು ಸರಿಸಿ ಮುಂದೆ ೧೦೦ ಮೀಟರ್ ಪ್ರಯಾಣ ಮಾಡುವಾಗಲೇ ನಮ್ಮ ಕಾರಿನ ಮೇಲ್ಭಾಗಕ್ಕೆ ಬಂಡೆಗಲ್ಲು ಬಿದ್ದಂತೆ ಶಬ್ದ ಆಯಿತು.ನೋಡುವಾಗ ಮಂಜುಗಡ್ಡೆ ....ಹೀಗೆ ಸುಮಾರು ೧೫ ಕಿಲೋ ಮೀಟರ್ ಕಡಿದಾದ ರಸ್ತೆಯಲ್ಲಿ ಪ್ರಯಾಣ ಮಾಡಿದಾಗ "ನ್ಯಾಲಾಂ"ಎಂಬ ಸಣ್ಣ ಹಳ್ಳಿ ಬಂತು.ಅಲ್ಲಿ ಒಂದು ಸಾಮಾನ್ಯ ರೀತಿಯ ಒಂದು ವಸತಿ ಗೃಹವನ್ನು ನಮಗಾಗಿ ಏರ್ಪಾಡು ಮಾಡಿದ್ದರು.ಅಲ್ಲಿಗೆ ತಲುಪುವಾಗ ಸಮಯ ಬೆಳಿಗ್ಗೆ ೮.೦೦ ಘಂಟೆ ...ಬೆಳಗ್ಗಿನ ಉಪಾಹಾರಕ್ಕೆ ಬ್ರೆಡ್ ಜ್ಯಾಂ ಇನ್ನು ನಾವು ಇಲ್ಲಿ ೨ ದಿವಸ ಇರಬೇಕಾಗುತ್ತದೆ ಎಂದು ಪಾಂಡೆಯವರು ತಿಳಿಸಿದರು..ಮಧ್ಯಾಹ್ನ ವರೆಗೆ ವಿಶ್ರಾಂತಿ ಮಾಡಿ ಸಂಜೆ ಸ್ವಲ್ಪ ಪ್ರಕೃತಿ ಸೌಂದರ್ಯವನ್ನು ಸವಿಯುತ್ತ ನಮ್ಮ ಕರ್ನಾಟಕದ ೧೦ ಮಂಡಿಯ ತಂಡ ಹರಟೆ ಹೊಡೆದೆವು.ಸಂಜೆ ೬.೦೦ ಘಂಟೆಗೆ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿದೆವು.ಮರುದಿನದ ದಿನಚರಿಯ ಬಗ್ಗೆ ಪಾಂಡೆ ಮಾಹಿತಿ ನೀಡಿದರು.ಈ ಭಯಾನಕವಾದ ಪ್ರಕೃತಿ ಸೌಂದರ್ಯವನ್ನು ನಾವೆಲ್ಲ ಪರಸ್ಪರ ಹಂಚಿಕೊಂಡೆವು,ಇದರ ಛಾಯಾಚಿತ್ರ ಮಾತ್ರ ತೆಗೆಯಲು ಚೀನಾ ಮಿಲಿಟರಿ ಪಡೆಯವರ ಅವಕಾಶ ಇರಲಿಲ್ಲ.ಅವರು ನಮ್ಮೊಂದಿಗೆ ಈ ಪ್ರದೇಶ ವರೆಗೆ ಸಾಂಬ ಗಡಿಯಿಂದ ಬಂದಿದ್ದರು.ಪ್ರತಿಯೊಬ್ಬರ ವೀಸಾ ಪಾಸ್ಪೋರ್ಟ್ ಮಾಹಿತಿಯನ್ನು ಪಡೆದು ತಲಾ ಒಬ್ಬೊಬ್ಬರಿಗೆ ರೂ,೨೫,೦೦೦ (ಇಪ್ಪತ್ತೈದು ಸಾವಿರ ರೂ.ಗಳು.)ಪ್ರವೇಶ ಶುಲ್ಕವನ್ನು ವಿಧಿಸಿದರು.ನಾವು ಈ ಶುಲ್ಕದ ಮಾಹಿತಿಯನ್ನು ಚೀನಾ ಅಧಿಕಾರಿಗಳ ಬಳಿಯಿಂದ ತಿಳಿದುಕೊಂಡೆವು."ಇದು ಇನ್ನು ನೀವು ಈ ದೇಶದಿಂದ ಹೋಗುವ ವರೆಗೆ ನಮ್ಮ ಜವಾಬ್ದಾರಿ ...ನಿಮ್ಮ ಪ್ರಯಾಣದ ಮಾಹಿತಿಯನ್ನು ನಾವು ಪಡೆಯುತ್ತಾ ಇರುತ್ತೇವೆ.ಮತ್ತು ಚೀನಾ ಮಿಲಿಟರೀ ಪಡೆಯಿಂದ ೧೦ ಯೋಧರನ್ನು ನಿಮ್ಮ ಆರೋಗ್ಯ ವಿಚಾರಣೆ ಗಾಗಿ ನೀವಿರುವ ಸ್ಥಳವನ್ನು ತಿಳಿದುಕೊಂಡು ಪ್ರತೀದಿನ ಕಳುಹಿಸುತ್ತೇವೆ "ಎಂದರು.ರಾತ್ರಿ ೯.೦೦ ಘಂಟೆ....ಹಸಿವು...ಅಂದಿನಿಂದ ಪ್ರಾರಂಭ ...ನಮ್ಮ ಅನ್ನ ಸಾರು ಮಜ್ಜಿಗೆ ಇಲ್ಲ..ಕೇವಲ ಟೊಮೇಟೊ ಸೂಪ್.ಬ್ರೆಡ್ ಜ್ಯಾಂ.ಅದನ್ನು ಅಲ್ಪ ಸ್ವಲ್ಪ ಹೊಟ್ಟೆಗೆ ಹಾಕಿ ಮಲಗಿದೆವು.ಆಗ ಅಲ್ಲಿಯ ಉಷ್ಣಾಂಶ -೮ ಡಿಗ್ರೀ ....... ನಮ್ಮ ಭಾರತದ ಸಮಯಕ್ಕೂ ಇಲ್ಲಿನ ಸಮಯಕ್ಕೂ ಎರಡೂವರೆ ಘಂಟೆ ವ್ಯತ್ಯಾಸ.

2 comments:

  1. ಓಹ್,ಅಂಬಗ ನಿಂಗಳ ಅಷ್ಟು ಉದಿಯಪ್ಪಗ ಕರಕ್ಕೊಂದು ಹೋದದ್ದು ಹಾಂಗೆ ಅಲ್ದಾ?ಇಲ್ಲದ್ರೆ ನಿಜವಾಗಿ ಎಲ್ಲೋರಿಂಗೂ ಹೆದರಿಕೆ ಆವತಿತ್ತು. ಅಷ್ಟೂ ಕಷ್ಟದ ಜಾಗೆಯ ನಿಂಗ ಹೋಗಿ ಬಯಿಂದೀರಲ್ದ?ನಿಂಗ ಪೂರ್ವ ಜನ್ಮಲ್ಲಿ ಮಾಡಿದ ಪುಣ್ಯ,ಸರ್,
    ನಿಂಗ ವಿವರಿಸ್ವದು ನೋಡಿದರೆ ಎನಗೆ ಹೆದರಿಕೆ ಆವತು.ಅಷ್ಟೂ ನೆಂಪು ಮಾಡಿಕ್ಕೊಂಡು ಎನ್ನ ಹಾಂಗಿಪ್ಪವರ ಅಲ್ಲಿಗೆ ಹೋದ ಹಾಂಗೆ &ಕನ್ನಿಂಗೆ ಕಟ್ಟಿದ ಹಾಂಗೆ ವಿವರಿಸಿದ್ದಕ್ಕೆ ತುಂಬಾ ಧನ್ಯವಾದಂಗ,
    ಹ,ಹೇಳಿದ ಹಾಂಗೆ ಅಲ್ಲಿ ಬ್ರೆಡ್ ಜ್ಯಾಂ ಮಾತ್ರವ?ತುಂಬಾ ಕಷ್ಟ ಆಯಿದಿಲ್ಲ್ಯ ಸರ್,ನಿಂಗೋಗೆ..

    ReplyDelete
  2. ಲಾಯ್ಕ ಆಯ್ದು ಅಣ್ಣ ...
    ಎನಗೂ ಓದಿಯಪ್ಪಗ ಹೆದರಿಕೆ ಆತು ..... :(

    ReplyDelete