ಮುಂಜಾನೆ ೩ ಘಂಟೆಯ ವಾತವರಣ..ನಮಗೆಲ್ಲ ಮಡಿಕೇರಿ ಚಳಿಯೇ ಮೈ ನಡುಗುತ್ತಿರುವಾಗ ಈ ಚಳಿಯನ್ನು ತಡೆಯಲು ಸಾಧ್ಯವೇ?ರೂಮಿನ ಒಳಗಿನಿಂದಲೇ ಕಿಟಕಿ ತೆರೆದು ನೋಡಿದಾಗ ಒಂದೇ ಕ್ಷಣ ನಮ್ಮ ಫ್ರಿಜ್ ನ ಒಳಗೆ ಹೊಕ್ಕಂತಾಯಿತು. ಆಗಲೇ ಇರುವ ಸ್ವೆಟರ್ ಮೇಲಿಂದ ಮತ್ತೊಂದು ಸ್ವೆಟರ್ ಒಂದು ಕೋಟು ಹಾಕಿದೆ.ಆಗ ಏನೋ ಒಂದು ಸ್ವಲ್ಪ ಮೈ ಬಿಸಿ ಆದ ಅನುಭವ.೪.೩೦ ಕ್ಕೆ ಸೂರ್ಯೊದಯವಾಯಿತು. ಹಲ್ಲುಜ್ಜಿ ಆದ ಮೇಲೆ ನಮಗೆಲ್ಲರಿಗೂ ಒಂದು ಲೀಟರ್ ಸ್ಟೀಲಿನ ಬೋಗುಣಿಯಲ್ಲಿ ತುಂಬಾ ಬಿಸಿಯಾದ ಲೈಟ್ ಚಾ ಮತ್ತು ಒಂದು ಬಿಸ್ಕೆಟ್ ಪ್ಯಾಕ್ ಕೊಟ್ಟರು.ಅಷ್ಟರವರೆಗೆ ಅಷ್ಟು ಚಾ ಕುಡಿಯದೆ ಇದ್ದವ ನಾನು ನೀರು ಕುಡಿದಂತೆ ಕುಡಿದೆ.ಶರೀರ ಒಂದು ರೀತಿ ಬಿಸಿ ಆದ ಅನುಭವ..... ನಂತರ ಪಾಂಡೆ ರವರು ನಮ್ಮನ್ನು ವಾಕಿಂಗ್ ಕರೆದುಹೋಗಲು ಕಾಯ್ತಾ ಇದ್ದರು.ಸಮಯ ೫.೧೫ ಅಷ್ಟರವರೆಗೆ ನಿತ್ಯ ಸ್ನಾನದ ನಂತರ ನಮ್ಮ ಕೆಲಸಗಳು ನಡೆಯುತ್ತಿದ್ದು ಇವತ್ತಿನಿಂದ ಎಲ್ಲ ಸರೀ ಹಿಂದೆಮುಂದೆ.ಅಂತೂ ಪಾಂಡೆ ಜೊತೆಗೆ ಹೆಜ್ಜೆ ಹಾಕಿದೆವು.ಈ ವಾಕಿಂಗ್ ಯಾಕೆಂದರೆ ೪ ದಿವಸಗಳ ನಂತರ ಕೈಲಾಸ ಪರ್ವತ ಪ್ರದಕ್ಷಿಣೆ ಇತ್ತು,ಹಾಗಾದ ಕಾರಣ ನಮ್ಮ ಶರೀರವು ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ನಮಗೆ ತಯಾರಿಯನ್ನು ಮಾಡ್ತಾ ಇದ್ದರು.ನಮ್ಮ ಊರಿನಲ್ಲಿ ವಾಕ್ ಮಾಡುವ ರೀತಿ ನಾನು ನಡೆದಾಗ ಪಾಂಡೆ ಸಲಹೆ ಕೊಟ್ಟರು.ಅವರ ಸಲಹೆ ಪ್ರಕಾರ ವಾಕ್ ಮಾಡಿದೆ,ಸುಮಾರು ೨ ಕಿಲೋ ಮೀ.ನಡೆದಾಗ ೧೦೦ ಮೀಟರ್ ಎತ್ತರದ ಗುಡ್ಡ ಎದುರಾಯಿತು.ಇದನ್ನು ಚಾರಣ ಮಾಡಬೇಕೆಂದು ಪಾಂಡೆ ಹೇಳಿದರು. ನನಗೆ ಕುಮಾರ ಪರ್ವತ ಚಾರಣ ಮಾಡಿದಷ್ಟು ಕಷ್ಟ ಆಗಲಿಕ್ಕಿಲ್ಲ ಎಂದು ಗುಡ್ಡ ನೋಡುವಾಗ ಅನಿಸಿತು.ಇರಲಿ ಎಂದು ಆಲೋಚಿಸಿ ೨೫ ಮೀಟರ್ ಗುಡ್ಡ ಏರಿದಾಗ ಒಂದೇ ಸಮನೆ ಉಸಿರಾಟ ಮಾಡಲು ಕಷ್ಟ ಆಯಿತು.ಆಗ ಪಾಂಡೆಯವರು ಅಷ್ಟರಲೀ ಆಮ್ಲಜನಕದ ಕೊರತೆ ಇರುವ ಕಾರಣ ಇಲ್ಲಿಯ ವಾಕಿಂಗ್ ಶೈಲಿ ಈ ರೀತಿ ಎಂದು ಹೇಳಿದರು.ಅವರ ಸೂಚನೆ ಪ್ರಕಾರ ನಡೆದಾಗ ಸ್ವಲ್ಪ ಸುಧಾರಿಸಿದೆ.ಒಂದು ಕ್ಷಣ ಜೀವ ಬಂದಂತಾಯಿತು ನನಗೆ,ಕೊರೆಯುವ ಚಳಿಅಲ್ಲಿಯೂದರೂ ನನಗೆ ಬಾಯಾರಿಕೆ ಸಣ್ಣಗೆ ಇಂಗಿತು.ಮತ್ತೆ ಅಲ್ಲಿಂದ ಹೊರಟಾಗ ಕೆಳಗಿನ ಝಾರಿಯ ಸುಂದರ ಫೋಟೋಗಳನ್ನು ಕ್ಲಿಕ್ಕಿಸಿದೆ.ಪ್ರಕೃತಿ ಮಾತೆಯ ಸೌಂದರ್ಯಕ್ಕೆ ನನ್ನ ಆಯಾಸ ಎಲ್ಲಾ ಮಾಯವಾಯಿತು.ಆಗ ಸುಮಾರು ೬ ಕೀ ಮೀ ನಡೆದಾಗಿತ್ತು.ಇನ್ನೊದು ಬದಿಯಿಂದ ವಾಹನ ಹೋಗುವ ಶಬ್ದ ಕೇಳತೊಡಗಿತು. ಮೇಲೇರಲು ಕಷ್ಟವಾದ ನಂಗೆ ಇಳಿಯಲು ಕಷ್ಟವೇನೂ ಆಗಲಿಲ್ಲ. ನಾವೆಲ್ಲಾ ಗ್ರೂಪ್ ಫೋಟೋ ತೆಗೆದು ಪ್ರಕೃತಿ ಸೌಂದರ್ಯವನ್ನು ಸವಿಯುತ್ತಾ ಕೆಳಗೆ ಇಳಿದೆವು.ಇಂದಿನಿಂದ ನಿತ್ಯ ಈ ವಾಕಿಂಗ್ ಇದೇ ರೀತಿಯಾಗಿ ಇರುತ್ತದೆ ದಯವಿಟ್ಟು ನಮ್ಮೊಡನೆ ಸಹಕರಿಸಬೇಕು ಎಂದು ಪಾಂಡೆಯವರು ನಮ್ಮಲ್ಲಿ ವಿನಂತಿಸಿಕೊಂಡರು.ಮಧ್ಯಾಹ್ನ ಸುಮಾರು ೧೨.೩೦ ಎಲ್ಲರೂ ಊಟ ಮಾಡಿ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳೋಣ ಎಂದು ನಮ್ಮ ಮಂಚದಲ್ಲಿ ಮಲಗಿದೆವು.ಆಯಾಸಕ್ಕೆ ನಿದ್ರೆ ಹಿಡಿದು ಸಂಜೆ ೬ ಘಂಟೆ ಆದದ್ದೇ ತಿಳಿಯಲಿಲ್ಲ. ನಾವು ಸ್ವಲ್ಪ ಹೊತ್ತು ಅಲ್ಲಿಯೇ ಇದ್ದ ಪೇಟೆಯಲ್ಲಿ ಅಡ್ಡಾಡಿ ನಮ್ಮ ಊರಿಗೆ ದೂರವಾಣಿ ಕರೆ ಮಾಡಿ ಇಲ್ಲಿನ ಅನುಭವಗಳನ್ನು ತಿಳಿಸಿದೆವು ...
ರಾತ್ರಿ ೮.ಘಂಟೆ..... ಬಂದು ಊಟದ ಶಾಸ್ತ್ರ ಮಾಡಿದೆವು.ಊಟಕ್ಕೆ ಟೊಮೇಟೊ ಸೂಪ್ ಎರಡು ರೊಟ್ಟಿ ದಾಲ್ ಬೇಯಿಸಿದ ಜೋಳ ಇಷ್ಟು ಬಗೆಯ ಪದಾರ್ಥ ಗಳು ಇದ್ದವು ಅನ್ನ ಒಂದು ಬಿಟ್ಟು. ನಮ್ಮ ಊರಿನ ಗಂಜಿ ಊಟ ಅಂದರೆ ಆಗ ಅಷ್ಟು ಬೆಲೆ ಇದೆ ಎಂದು ಆಗ ಗೊತ್ತಾಯಿತು.ಏನೇ ಆಗಲಿ ಇದ್ದದನ್ನು ತಿಂದಾಯಿತು. .
ಆದರೂ ಪ್ರಕೃತಿಯನ್ನು ನೋಡಿದ ನಮಗೆ ಊಟ ಮಾಡುವಾಗ ಒಂದು ಸಂತೃಪ್ತಿ ಭಾವನೆ ತುಂಬಿ ಬಂದಿತ್ತು.
ಅಹಾ ದೇವರು ಎಲ್ಲಿ ಆಡಗಿದ್ದಾನೆಂದು ಎಷ್ಟು ಚೆನ್ನಾಗಿ ಪ್ರಕೃತಿಯನ್ನು ನೋಡಿ ತಿಳಿಯಬೇಕು. ನಾಸ್ತಿಕನಾಗಲಿ, ಆಸ್ತೀಕನಾಗಲಿ ದೇವರಿದ್ದಾನೆಂದು ಒಪ್ಪಲೇಬೇಕು. ಹೇಗೆ ಅಂದರೆ ಪರಮಾತ್ಮನು ನಮ್ಮ ಈ ದೇಹದಲ್ಲಿಯೇ ಆಡಗಿದ್ದಾನೆ. ಅತ ನಮ್ಮ ಹೃದಯಕಮಲದಿ ನೆಲಿಸಿದ್ದಾನಾ? ತಲೆಯ ಬಹು ಮುಖ್ಯ ಅಂಗ ಮೆದುಳಿನಲ್ಲೋ ಇಲ್ಲಾ ಎರಡು ಹುಬ್ಬಿನ ನಡುವೆಯೋ?? ಹಾಂ..... ಈ ಹುಚ್ಚು ತರ್ಕ ಸಾಕಿನ್ನು. ಆ ಕಣ್ಣಿಗೆ ಕಾಣದ ದೇವರು ಹೊಟ್ಟೆಯೊಳಗೆ ಅಡಗಿದ್ದಾನೆ. ಅವನು ಸಂತೃಪ್ತನಾದರೆ ಮಾತ್ರ ನಾವು ಸಂತೃಪ್ತರು. ಇರುಳಿನಲ್ಲಾಗಲಿ, ಹಗಲಿನಲ್ಲಾಗಲಿ ಶಯನೋತ್ಸವದ ಸಮಯ ಹೊರತುಪಡಿಸಿ, ಅತನನ್ನು ಮರೆಯಲು ಸಾದ್ಯವೇ? ನಾನಾವಿಧದ ವೇಷಗಳು, ಕಡುಕ್ರೂರಿ ಒಡೆಯನಲ್ಲಿ ಮೈಮುರಿವ ದುಡಿತ ಎಲ್ಲವೂ ಹೊಟ್ಟೆಯೊಳಗಿನ ದೇವರ ಕೃಪೆಯಲ್ಲವೆ???
ನೀವೇನು ಹೇಳ್ತೀರಾ?
ರಾತ್ರಿ ೮.ಘಂಟೆ..... ಬಂದು ಊಟದ ಶಾಸ್ತ್ರ ಮಾಡಿದೆವು.ಊಟಕ್ಕೆ ಟೊಮೇಟೊ ಸೂಪ್ ಎರಡು ರೊಟ್ಟಿ ದಾಲ್ ಬೇಯಿಸಿದ ಜೋಳ ಇಷ್ಟು ಬಗೆಯ ಪದಾರ್ಥ ಗಳು ಇದ್ದವು ಅನ್ನ ಒಂದು ಬಿಟ್ಟು. ನಮ್ಮ ಊರಿನ ಗಂಜಿ ಊಟ ಅಂದರೆ ಆಗ ಅಷ್ಟು ಬೆಲೆ ಇದೆ ಎಂದು ಆಗ ಗೊತ್ತಾಯಿತು.ಏನೇ ಆಗಲಿ ಇದ್ದದನ್ನು ತಿಂದಾಯಿತು. .
ಆದರೂ ಪ್ರಕೃತಿಯನ್ನು ನೋಡಿದ ನಮಗೆ ಊಟ ಮಾಡುವಾಗ ಒಂದು ಸಂತೃಪ್ತಿ ಭಾವನೆ ತುಂಬಿ ಬಂದಿತ್ತು.
ಅಹಾ ದೇವರು ಎಲ್ಲಿ ಆಡಗಿದ್ದಾನೆಂದು ಎಷ್ಟು ಚೆನ್ನಾಗಿ ಪ್ರಕೃತಿಯನ್ನು ನೋಡಿ ತಿಳಿಯಬೇಕು. ನಾಸ್ತಿಕನಾಗಲಿ, ಆಸ್ತೀಕನಾಗಲಿ ದೇವರಿದ್ದಾನೆಂದು ಒಪ್ಪಲೇಬೇಕು. ಹೇಗೆ ಅಂದರೆ ಪರಮಾತ್ಮನು ನಮ್ಮ ಈ ದೇಹದಲ್ಲಿಯೇ ಆಡಗಿದ್ದಾನೆ. ಅತ ನಮ್ಮ ಹೃದಯಕಮಲದಿ ನೆಲಿಸಿದ್ದಾನಾ? ತಲೆಯ ಬಹು ಮುಖ್ಯ ಅಂಗ ಮೆದುಳಿನಲ್ಲೋ ಇಲ್ಲಾ ಎರಡು ಹುಬ್ಬಿನ ನಡುವೆಯೋ?? ಹಾಂ..... ಈ ಹುಚ್ಚು ತರ್ಕ ಸಾಕಿನ್ನು. ಆ ಕಣ್ಣಿಗೆ ಕಾಣದ ದೇವರು ಹೊಟ್ಟೆಯೊಳಗೆ ಅಡಗಿದ್ದಾನೆ. ಅವನು ಸಂತೃಪ್ತನಾದರೆ ಮಾತ್ರ ನಾವು ಸಂತೃಪ್ತರು. ಇರುಳಿನಲ್ಲಾಗಲಿ, ಹಗಲಿನಲ್ಲಾಗಲಿ ಶಯನೋತ್ಸವದ ಸಮಯ ಹೊರತುಪಡಿಸಿ, ಅತನನ್ನು ಮರೆಯಲು ಸಾದ್ಯವೇ? ನಾನಾವಿಧದ ವೇಷಗಳು, ಕಡುಕ್ರೂರಿ ಒಡೆಯನಲ್ಲಿ ಮೈಮುರಿವ ದುಡಿತ ಎಲ್ಲವೂ ಹೊಟ್ಟೆಯೊಳಗಿನ ದೇವರ ಕೃಪೆಯಲ್ಲವೆ???
ನೀವೇನು ಹೇಳ್ತೀರಾ?
baari laikayidu ooduvaga maijum heli heluttu.
ReplyDelete