ನನ್ನ ಮೊದಲ ಮಾತು...

ನಾನು ಮಾಡಾವು ಗಣೇಶ.
ನನ್ನ ಮನದ ಮಾತುಗಳನ್ನು ಇಲ್ಲಿ ಬ್ಲಾಗಿಸುತ್ತಿದ್ದೇನೆ...
ನಿಮ್ಮ ಓದುವಿಕೆ ಹಾಗೂ ಸಹಕಾರವನ್ನು ನಿರೀಕ್ಷೆ ಮಾಡುತ್ತೇನೆ.

ಭಾವನೆಗಳು ಉಕ್ಕಿ, ನೆನಪುಗಳ ಬುತ್ತಿ ಬಿಚ್ಚಿ, ಕಲ್ಪನೆಯ ಕಂಪು ಪಸರಿಸಿದಾಗ... «»«»«»«»«»«»«»«»«» ಮನಸಿನಾಳದ ಮಾತು ಹೊರಹೊಮ್ಮಿಸಲು ಇದೊಂದು ಪೀಠಿಕೆ!... ಒಳ್ಳೆಯ ಲೇಖನಗಳ ಬರೆಯಲು ಬೇಕು ನಿಮ್ಮಯ ಹಾರೈಕೆ. «»«»«»«»«»«»«»«»«»«»«»«»«»«»«» ಸದಾ ನಿಮ್ಮವ,
~
ಗಣೇಶ್ ಭಟ್,ಮಾಡಾವು

Friday, October 30, 2009

ಮಾನಸ ಸರೋವರ ಯಾತ್ರೆ -೧೭








ಎಲ್ಲವೂ ಮಂಜುಗಡ್ಡೆಯಾಗಿಬಿಡುವ ಇಲ್ಲಿನ ಅನುಭವವೇ ವಿಭಿನ್ನ. ಎರಡೇ ದಿನಗಳಲ್ಲಿ ನಮ್ಮ 'ಸ್ಲೀಪಿಂಗ್ ಬ್ಯಾಗ್'ಗಳೆಲ್ಲಾ ಮಂಜುಗಡ್ಡೆಯಿಂದ ಆವೃತವಾಗಿಬಿಟ್ಟವು... ನಮ್ಮ ಚಾರಣ ಮುಂದುವರಿದಂತೆಲ್ಲಾ ಈ ಮನಮೋಹಕ ಪ್ರದೇಶದ ಭೀಕರತೆ ಅರಿವಾಗುತ್ತಾ ಹೋಯಿತು. ಹಿಮಗಾಳಿಯಲ್ಲಿ ಸೆಟೆದುಕೊಳ್ಳುವ ಕಾಲುಗಳನ್ನು ಮುಂದೆ ಇಡಲೂ ಸಾಧ್ಯವಾಗುವುದಿಲ್ಲ. ಅದರಲ್ಲೂ ಎರಡು ಹಿಮಗಡ್ಡೆಗಳು ಸಂಧಿಸುವ ತಾಣ ದಾಟಬೇಕಾದ ಸಂದರ್ಭದಲ್ಲಂತೂ ಹೃದಯ ಬಾಯಿಗೆ ಬಂದಂತಾಗುತ್ತದೆ! ಆ ತಾಣದಲ್ಲಿ ಕೆಳಗೆ ದೂರದಲ್ಲೆಲ್ಲೋ ನೀರು ಹರಿದ ಸದ್ದು ಕೇಳುತ್ತದೆ. ಆದರೆ ಏನೂ ಕಾಣುವುದಿಲ್ಲ. ಅಂತಹ ತಾಣವನ್ನು ಬಹು ಎಚ್ಚರಿಕೆಯಿಂದ ದಾಟುವ ಬಗ್ಗೆ ನಮಗೆ ಸಾಕಷ್ಟು ತರಬೇತಿ ನೀಡಲಾಗಿತ್ತು. ಅಲ್ಲಿ ಆಕಸ್ಮಿಕವಾಗಿ ಹಿಮದ ಮೇಲ್ಮೈ ಕುಸಿದು ನಾವೇನಾದರೂ ಕೆಳಗೆ ಜಾರಿದರೆ ಮೈನಸ್ 200 ಡಿಗ್ರಿಯ ಉಷ್ಣಾಂಶದಲ್ಲಿ ಹಿಮಗಡ್ಡೆಯಾಗಬೇಕಾಗುತ್ತದೆ! ಅಂದ ಹಾಗೆ, ಟಿಎಸ್‌ಐ ಛಾಯಾಗ್ರಾಹಕ ಭಾಸ್ಕರ್ ಅವರಿಗಂತೂ ಅಲ್ಲಿನ ಸುಂದರ ತಾಣಗಳ ಮಹತ್ವ ತುಂಬಾ ಚೆನ್ನಾಗಿಯೇ ಅರಿವಾಯಿತು. ಈ ಕ್ಯಾಂಪ್‌ಗೆ ಸಾಗುವ ಚಾರಣಿಗರ ಲಗೇಜ್ 20 ಕೆ.ಜಿ.ಯದು. ಅದರ ಜೊತೆಗೆ ಭಾಸ್ಕರ್ ಅವರ ಕ್ಯಾಮರಾ ಲಗೇಜ್ 12 ಕೆ.ಜಿ. ಇವನ್ನೆಲ್ಲಾ ಹೊತ್ತು ಫೋಟೊ ಕ್ಲಿಕ್ಕಿಸುವುದು ಹೇಗೆ? ಆಗ ನೆರವಾದವರೇ ತ್ಸೆಂಗೆ ಎಂಬ ಒಬ್ಬ ಶೇರ್ಪಾ . ಭಾಸ್ಕರ್ ಲಗೇಜ್ ಅವರು ಹೊತ್ತಿದ್ದರಿಂದಲೇ ಇಷ್ಟೆಲ್ಲಾ ಚಿತ್ರಗಳನ್ನು ತೆಗೆಯಲು ಸಾಧ್ಯವಾಗಿದ್ದು.... ಚಾರಣದಲ್ಲಿ ನಮ್ಮ ಜೊತೆ ಹೆಜ್ಜೆ ಹಾಕಿದ ಭಾಸ್ಕರ್ , "ಆಗಸದಿಂದ ನೋಡಿದರೆ ಈ ಪ್ರದೇಶವೆಲ್ಲಾ ಸ್ವರ್ಗದಂತೆ ಭಾಸವಾಗುತ್ತದೆ. ಇಲ್ಲಿಗೆ ವಿಮಾನದಲ್ಲಿ ಬರುವುದಂತೂ ಸುಂದರ ಅನುಭವ. ಆದರೆ ಈ ನೆಲದ ಮೇಲೆ ನಡೆಯುವುದು ಮಾತ್ರ ಮಹಾಸಂಕಟ" ಎಂದು ಬಿಟ್ಟರು. ಅವರ ಗಾಯಗೊಂಡ ಮೊಣಕಾಲಿಗೆ ಬ್ಯಾಂಡೇಜ್ ಸುತ್ತಲಾಗಿತ್ತು. ಬೀಸುವ ಚಳಿಗಾಳಿ ಅವರ ನೋವನ್ನು ಇನ್ನಷ್ಟು ಹೆಚ್ಚಿಸುತ್ತಿತ್ತು. ಇಂತಹ ಪ್ರದೇಶದಲ್ಲಿ ಅದರಲ್ಲೂ, ಮೊಣಕಾಲಿಗೆ ಗಾಯವಾದ ಸಂದರ್ಭದಲ್ಲಿ 'ಪ್ರಕೃತಿ ಕರೆ'ಗಳನ್ನು ಹೇಗೆ ತೀರಿಸಿಕೊಳ್ಳುತ್ತಾರೆ ಎಂಬ ಕುತೂಹಲ ನನಗೆ ಕಾಡಿತು.... ಈ ಹಿಮ ಪ್ರದೇಶದಲ್ಲಿ 'ಮಲ ವಿಸರ್ಜನೆ' ಮಾಡುವುದು ಅತ್ಯಂತ ತ್ರಾಸದಾಯಕ. ಎರಡು ಸೀಮೆಎಣ್ಣೆ ಡಬ್ಬದ ಮೇಲೆ ಮರದ ಹಲಗೆಯೊಂದನ್ನು ಇಟ್ಟು ಅದರ ಮೇಲೆ ಕೂರಬೇಕು. ಇಲ್ಲಿನ ಶೇರ್ಪಾ ಒಬ್ಬನ ಅನುಭವವನ್ನು ಕೇಳಿ: ಅವರು ಹೀಗೆ ಕುಳಿತಿದ್ದಾಗ ಸಮತೋಲನ ಕಾಯ್ದುಕೊಳ್ಳಲು ಪಕ್ಕದಲ್ಲಿ ಒಂದು ಕೋಲನ್ನು ನೆಲಕ್ಕೆ ಊರಿ ಹಿಡಿದುಕೊಂಡರು, ಅಷ್ಟೇ. ಕೂಡಲೇ ಮಂಜುಗಡ್ಡೆಯಂತಾಗಿದ್ದ ಆ ಕಂಬಕ್ಕೆ ಅವರ ಅಂಗೈ ಅಂಟಿಕೊಂಡುಬಿಟ್ಟಿತು. ಬಿಡಿಸಿಕೊಳ್ಳಲು ಜೋರಾಗಿ ಕೈ ಎಳೆದರೆ ಅಂಗೈ ಚರ್ಮವೇ ಹರಿದುಹೋಗುತ್ತದೆ. ಆ ಪ್ರದೇಶದ ಅನುಭವ ಚೆನ್ನಾಗಿದ್ದ ಆ ಶೇರ್ಪಾ ಹಾಗೆ ಜೋರಾಗಿ ಕೈ ಎಳೆಯದೆ, ಬಿಸಿ ನೀರು ತರಿಸಿ ಅದನ್ನು ಕಂಬಕ್ಕೆ ಅಂಗೈ ಮೇಲೆ ಹಾಯಿಸಿ ನಿಧಾನವಾಗಿ ಕೈಬಿಡಿಸಿಕೊಂಡರು. ಹಿಮದ ನೆಲೆಯಲ್ಲಿ ಇಂತಹ ಅನುಭವಗಳು ಅದೆಷ್ಟೋ.!!!!!!!!
ಇಲ್ಲಿನ ರುದ್ರ ರಮಣೀಯ ಪ್ರಾಕೃತಿಕ ಸೌಂದರ್ಯ ನನ್ನ ಮನದಾಳದಿಂದ ಮರೆಯಾಗದು" ನನ್ನ ಮಟ್ಟಿಗೆ ಇಲ್ಲಿ ತೆಗೆದ ಚಿತ್ರಗಳೇ ಎಲ್ಲಾ ಕಥೆಯನ್ನೂ ಹೇಳುತ್ತವೆ. ನಾನು ಕೇವಲ ಭಾವನೆಗಳನ್ನು ನಿರೂಪಿಸುತ್ತೇನೆ ಅಷ್ಟೇ. ದೇವರನ್ನು ಸಾಕ್ಷಾತ್ಕರಿಸಿಕೊಳ್ಳಲು ಕೈಲಾಸ ಪರ್ವತದಷ್ಟು ಉತ್ತಮ ಪ್ರದೇಶ ಬೇರಿಲ್ಲ ಎಂಬುದು ನನ್ನ ಭಾವನೆ. ಆ ಕಾರಣದಿಂದ ಹಾಗೂ ಪ್ರಾಕೃತಿಕ ರೌದ್ರತೆಯಿಂದ ಇದೊಂದು ಸ್ವರ್ಗ ಎನ್ನಬಹುದು. ಆದರೆ ಹಿಮಗಾಳಿಯನ್ನೆದುರಿಸುತ್ತಾ ಟೆಂಟ್‌ಗಳಲ್ಲಿ ವಾಸಿಸುವ ನಮ್ಮ ಪಾಲಿಗಂತೂ ಈ ಸಮಯ ಸ್ವರ್ಗದ ಸಾಕ್ಷಾತ್ಕಾರ...ಎಂಬುದು ನನ್ನ ಅನಿಸಿಕೆ.
ಆಗಸದಲ್ಲಿ ಮಂಜಿನ ನಡುವೆಯೂ ಮೋಡ ಹಾಕಿಕೊಳ್ಳುತ್ತಿತ್ತು ಎನ್ನಿಸುತ್ತದೆ. ಇದ್ದ ಅಲ್ಪ-ಸ್ವಲ್ಪ ಬೆಳಕೂ ಕಡಿಮೆಯಾಗುತ್ತಾ ಬರುತ್ತಿತ್ತು. ಸಮಯವೇನೋ ಸಂಜೆ ನಾಲ್ಕು ಘಂಟೆ ಸಮೀಪಿಸುತ್ತಿತ್ತಷ್ಟೇ. ಆದರೆ ಅಲ್ಲಿ ಸಂಜೆ ಆರು ಘಂಟೆಯ ನಂತರ ಚಾರಣ ಮಾಡುವುದು ಅಸಾಧ್ಯ ಎಂದು ನಮಗೆ ಚೆನ್ನಾಗಿ ಗೊತ್ತಿತ್ತು.. "ನಾಲ್ಕು ಘಂಟೆಯ ಚಾರಣ, ಸಣ್ಣದು" ಎಂದುಕೊಂಡು ಪಾಂಡೆ ಅವರು ಕರೆದುಕೊಂಡು ಹೊರಟ ಚಾರಣದಲ್ಲಿ ಎಂತೆಂಥ ಅನುಭವಗಳು! ಆರೇಳು ಘಂಟೆಯ ಅನುಭವ ಅಷ್ಟೇ. ಆದರೂ, ಆಗ ಸಂಜೆ ಘಂಟೆ ಎಷ್ಟೋ ಹೊತ್ತಾದಂತೆ ಇತ್ತು. . ಆದರೆ ಈ ಉತ್ಕೃಷ್ಟ ಅನುಭವವನ್ನು ನಾವು ಜೀವನದಲ್ಲಿ ಖಂಡಿತಾ ಮರೆಯುವುದಿಲ್ಲ ಎಂದು ಮಾತ್ರ ಖಚಿತವಾಗಿ ಹೇಳಬಲ್ಲೆ. ಕೇವಲ ಐದು ಕಿಲೋಮೀಟರುಗಳ ಚಾರಣದ ನಂತರ ಒಂದು ಟೆಂಟನ್ನು ಸಿದ್ಧಪಡಿಸಿಕೊಂಡು ಅದರಲ್ಲಿ ವಿಶ್ರಾಂತಿ ಪಡೆಯುವ ಪ್ರಯತ್ನ ಮಾಡಿದೆವು.

No comments:

Post a Comment